ಮಂಗಳವಾರ, ನವೆಂಬರ್ 29, 2022
ಶುಕ್ರವಾರ, ನವೆಂಬರ್ 18, 2022
ರಾತ್ರಿ ವೇಳೆಯಲ್ಲಿ ಆಕಾಶವನ್ನು ವೀಕ್ಷಿಸಿದಾಗ ಆಗಿಂದಾಗ್ಗೆ ನಕ್ಷತ್ರಗಳು ಬೀಳುವುದನ್ನು ಕಾಣುತ್ತೇವೆ. ಕಾರಣವೇನು?
ರಾತ್ರಿ ವೇಳೆಯಲ್ಲಿ ಆಕಾಶವನ್ನು ವೀಕ್ಷಿಸಿದಾಗ ಆಗಿಂದಾಗ್ಗೆ ನಕ್ಷತ್ರಗಳು ಬೀಳುವುದನ್ನು ಕಾಣುತ್ತೇವೆ. ಕಾರಣವೇನು?
ಉತ್ತರ:- 👇👇👇👇
ಆಗಿಂದಾಗ್ಗೆ ಬೀಳುವ ಈ ವಸ್ತುಗಳು ನಕ್ಷತ್ರಗಳಲ್ಲ. ಇವುಗಳಿಗೆ ಉಲ್ಕೆಗಳು ಎಂದು ಹೆಸರು. ಇವು ಸ್ವಯಂ ಪ್ರಕಾಶ ವಸ್ತುಗಳಲ್ಲ. ಉಲ್ಕೆಗಳು ಗುಂಪು ಗುಂಪಾಗಿ ಸೂರ್ಯನ ಸುತ್ತಲೂ ತಿರುಗುತ್ತವೆ. ಭೂಮಿಯ ಪಥಕ್ಕೆ ಅಡ್ಡವಾಗಿ ಬಂದಾಗ ಗುರುತ್ವಾಕರ್ಷಣ ಶಕ್ತಿಯಿಂದ ಎಳೆಯಲ್ಪಟ್ಟು ವಾತಾವರಣವನ್ನು ಸೇರುವುವು.ಆಗ ಉಂಟಾಗುವ ಘರ್ಷಣೆಯಿಂದ ಹತ್ತಿಕೊಂಡು ಉರಿಯುವವು. ಉಲ್ಕೆಗಳು ಸಾಕಷ್ಟು ದೊಡ್ಡವಿದ್ದರೆ ಸಂಪೂರ್ಣವಾಗಿ ಉರಿಯುವುದಕ್ಕೆ ಮುಂಚೆ ಭೂಮಿಯನ್ನು ಬಂದು ಸೇರುವವು. ಇವುಗಳಿಗೆ ಗಗನ ಶಿಲೆಗಳು ಎಂತಲೂ ಕರೆಯುತ್ತಾರೆ.
ಗುರುವಾರ, ನವೆಂಬರ್ 3, 2022
ಬೆಳ್ಳಿಯ ಕಾಲುಂಗುರ, ಹಾಕುವುದು ಏಕೆ?
ವೈಜ್ಞಾನಿಕ ಕಾರಣ
ಬೆಳ್ಳಿಯ ಕಾಲುಂಗುರ ಹಾಕುವುದು ಏಕೆ?
ಮದುವೆಯ ಸಮಯದಲ್ಲಿ ಹೆಣ್ಣು ಮಕ್ಕಳು ಬೆಳ್ಳಿಯ ಕಾಲುಂಗುರ ಹಾಕುತ್ತಾರೆ. ಕಾರಣ, ಬೆಳ್ಳಿ ಒಂದು ತಂಪು ಲೋಹ ಇದನ್ನು ಬೆರಳಿಗೆ ಹಾಕುವುದರಿಂದ ಭೂಮಿಯಲ್ಲಿನ ಗುರುತ್ವ ಶಕ್ತಿಯನ್ನ ಹೀರಿ ಗರ್ಭಕೋಶಕ್ಕೆ ವರ್ಗಾಯಿಸುತ್ತದೆ. ಇದರಿಂದ ಮದುವೆಯ ನಂತರ ಗರ್ಭಕೋಶ ಹೆಚ್ಚು ಕ್ರಿಯಾಶೀಲವಾಗಿ ಮಗು ಬೆಳವಣಿಗೆಗೆ ಅನುಕೂಲ. ಜೊತೆಗೆ ಹೆಣ್ಣು ಮಕ್ಕಳಲ್ಲಿ ಋತುಸ್ರಾವ ಸರಿಯಾಗಿರುವಂತೆ ನೋಡಿಕೊಳ್ಳುತ್ತದೆ. ಕಾಲುಂಗುರ ಬೆರಳು ದೇಹದ ವಿವಿಧ ಅಂಗಗಳೊಂದಿಗೆ ಸಂಪರ್ಕ ಹೊಂದಿದ್ದು ನಡೆಯುವಾಗ ಕಾಲುಂಗುರ ಸರಿದಾಡುವುದರಿಂದ ಬೆರಳಿನ ಮೇಲೆ ಒತ್ತಡ ಬಿದ್ದು ರಕ್ತ ಸಂಚಾರಕ್ಕೆ ಅನುಕೂಲವಾಗುತ್ತದೆ. ಬೆಳ್ಳಿ, ಬಂಗಾರ ಇಂತಹ ಲೋಹದ ವಸ್ತು ಧರಿಸುವುದರಿಂದ ನರದೌರ್ಬಲ್ಯ,ವಾತ, ಪಿತ್ತ ಹಿಡಿತದಲ್ಲಿರುತ್ತದೆ. ಮನಸ್ಸಿಗೆ ಶಾಂತಿ,ಸಂತೋಷ , ತೃಪ್ತಿ ನೀಡುವುದರಿಂದ ದೇಹದ ಸ್ಥಿತಿ ಉತ್ತಮವಾಗಿರುತ್ತದೆ
G
H
K
M
👉Modal schools - ಮಾದರಿ ಶಾಲೆಗಳು
👉MORAL EDUCATION - ಮೌಲ್ಯ ಶಿಕ್ಷಣ
👉Maps - - all village maps of karnataka
N
👉NALI KALI WORDS - ನಲಿಕಲಿ ಶಬ್ದಗಳು
👉Nalikali rhymes - ನಲಿಕಲಿ ಹಾಡುಗಳು
👉NMMS
👉NALIKALI SONGS - ನಲಿಕಲಿ ಹಾಡುಗಳು
O
👉Oduve nanu cards - ಓದುವೆ ನಾನು ಕಾರ್ಡ್ ಗಳು
👉Orders - ಆದೇಶಗಳು , ಸುತ್ತೋಲೆಗಳು
P
👉PRATHIBHA KARANJI - ಪ್ರತಿಭಾ ಕಾರಂಜಿ
👉PM SHRI LOGIN - ಪಿ ಎಮ್ ಶ್ರೀ ಲಾಗ್ ಇನ್
S
T
👉Text Books - ಸರಕಾರಿ ಪಠ್ಯ ಪುಸ್ತಕಗಳು
👉Tatsama- tadbava - ತತ್ಸಮ - ತದ್ಬವ
V
👉Vehicle / RTO / ವಾಹನಕ್ಕೆ ಸಂಬಂಧಿಸಿದ ಮಾಹಿತಿ
👉VIDYAWAHINI - ವಿದ್ಯಾವಾಹಿನಿ ಲಾಗ್ ಇನ್
Y
ಹುಲಿ , ಹುಲ್ಲು ತಿಂದರೆ, ಬದುಕುವುದಿಲ್ಲವೇ?
ವೈಜ್ಞಾನಿಕ ಕಾರಣ
ಹುಲಿ ಹುಲ್ಲು ತಿಂದರೆ, ಬದುಕುವುದಿಲ್ಲವೇ?
👉 ಸಸ್ಯಹಾರಿ ತಿನ್ನುವ ಆಹಾರ 3 ಹಂತದಲ್ಲಿ ಶಕ್ತಿಯಾಗಿ ಬದಲಾಗುತ್ತದೆ. ಸಸ್ಯಗಳಿಂದ ಬಹುಶರ್ಕರ(ಪಿಷ್ಟ), ಜೀವಿಗಳಲ್ಲಿ ದ್ವಿಶರ್ಕರ, ಏಕಶರ್ಕರ(ಗ್ಲುಕೋಸ್),ಕೊನೆಗೆ ಎಟಿಪಿ ಶಕ್ತಿಯಾಗಿ ಬದಲಾಗುತ್ತವೆ. ವಿಶೇಷ ಹಲ್ಲು & ಕರುಳ ರಚನೆ ಹೊಂದಿವೆ. ಜೀರ್ಣಕ್ರಿಯೆ ಹೆಚ್ಚುಸಮಯ ಹಿಡಿಯುತ್ತದೆ. ಆದರೆ ಮಾಂಸಾಹಾರಿ 2 ಹಂತದಲ್ಲಿ ಶಕ್ತಿ ಪಡೆಯುತ್ತವೆ. ದ್ವಿಶರ್ಕರ (ಮಾಂಸ), ಏಕಶರ್ಕರ, ಎಟಿಪಿ ಶಕ್ತಿಯಾಗಿ ಬದಲಾಗುತ್ತದೆ. ಚೂಪಾದ ಕೋರೆಹಲ್ಲು& ಚಿಕ್ಕ ಕರುಳು ಹೊಂದಿರುತ್ತವೆ. ದವಡೆಹಲ್ಲು ಇರುವುದಿಲ್ಲ. ಹೀಗಾಗಿ ಮಾಂಸಾಹಾರಿ ಸಸ್ಯ ತಿಂದು ಜೀರ್ಣಿಸುವ ಶಕ್ತಿ ಇರುವುದಿಲ್ಲ. ಆದ್ದರಿಂದ ಶುದ್ಧಮಾಂಸಾಹಾರಿಗಳು, ಸಸ್ಯ ಸೇವಿಸುವುದಿಲ್ಲ. ಜೀರ್ಣಕ್ರಿಯೆ ಕಡಿಮೆ ಅವಧಿಯಲ್ಲಿ ಮುಗಿಯುವುದರಿಂದ ಮಾಂಸಾಹಾರಿ ಕಡಿಮೆ ನೀರು ಕುಡಿಯುತ್ತವೆ. ಸಸ್ಯಹಾರಿ ಮಾಂಸ ಸೇವಿಸಬಹುದು,ಆದರೆ ಮಾಂಸಾಹಾರಿ ಸಸ್ಯಸೇವಿಸಿ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ.